ಅರಗಿಸುವ ಉದರ
ದುಃಖದ ಎದೆಯ ಮೇಲಿನ
ಮೌನ ಸಂವಾದ,
ಬೇಕೆಂದು ಕೇಳಿದ್ದು
ಹೊಟ್ಟೆಯ ಸುಖವನ್ನೇ ?
,
ರಾಕ್ಷಸ ಹೊಟ್ಟೆ,
ರಟ್ಟೆಗೆಷ್ಟು ಕೆಲಸ ಕೊಡುತ್ತಿದೆ,
ಬಿಟ್ಟೆನೆಂದರೂ ಬಿಡದೀ ಹೊಟ್ಟೆ,
,
ಹೊತ್ತಿ ಉರಿಯುವ
ಉದರದೊಳಗಿನ ವಿಲಯಾಗ್ನಿ
ಭಗ್ನವಾಗುವುದೆಂದು ನಂಬಿದರದು
ಬರೀ ಪೊಳ್ಳು ಭರವಸೆ
,
ಒಬ್ಬ ಭಕಾಸುರನೆಂಬುವವನಿದ್ದ!!!
ಹೇಳಿದ್ಯಾರು ??
ಎಲ್ಲಾ ಭಕಾಸುರರೆ, ಹೊಟ್ಟೆಗಾಗಿ,
,
ಇಲ್ಲಿಯವರೆಗೂ ಬಟ್ಟೆಗೂ
ಹೊಡೆದಾತವಿತ್ತು,
ಇನ್ನು ಅದಿಲ್ಲ,
ಬಟ್ಟೆ ಹಾಕಿದಂತೆ ನಟಿಸುವುದೇ
ಜಾಗತೀಕರಣದ ಒಳಗುಟ್ಟು
‘
ಹುಟ್ಟೋ ಸಂತತಿಯೆಲ್ಲ
ಮತ್ತೊಮ್ಮೆ ಆದಿಯೆಡೆಗೆ
ಹೊಟ್ಟೆಗಿಲ್ಲದ
ಬಟ್ಟೆ ಇರದ,
ದಿಟ್ಟ ದಿನಗಳೆಡೆಗೆ,
‘
ಎಷ್ಟೆಂದು ಮುಚ್ಚಿತ್ತು ಕಾಯುವುದು,
ಬಾಯಿ, ಮೈ ಯಾ
ಚಪಲವನು ?
ದಿಕ್ಕರಿಸಿ, ಗುಡುಗಲೇ ಬೇಕು
‘
ಜಗವ ಗೆದ್ದವನಿರಬಹುದು
ಹೊಟ್ಟೆಯನು ಗೆದ್ದವನಿಹನೇ?
ಅದರೊಳಗಿನ, ಮುಗಿಯದ
ಭಕಾಸುರನನ್ನು ಗೆದ್ದವನಿಹನೇ?
.
ವರ್ಷಗಳಿಂದಾ ಕೂಡಿತ್ತಿದ್ದು
ಇದೆಯೇ ಅಲ್ಲಿ,,,,,
ಹ್ಹ ಹ್ಹ , ಹೊಟ್ಟೆಯ ನಾಟಕವದು
ತಿಂದಂತೆ ನಟಿಸಿ,
ಮತ್ತಷ್ಟು ಬೇಕೆನ್ನುವುದು,
‘
ಆದಿಯಿಂದಲೂ
ಅಂತ್ಯದ ವರೆಗೂ
ಹೊಟ್ಟೆ ಮಾತ್ರ ಸತ್ಯ,
ಸಾಯುವ ಕೊನೆಗಳಿಗೆಯಲಿ
ಹೊಟ್ಟೆ ಮಾತ್ರ ಬರುವುದು
ಇನ್ಯಾವುದಲ್ಲ,
— ಜೀ ಕೇ ನ
ಮನುಷ್ಯನ ಬಕಾಸುರತೆ, ಚಪಲತೆಗಳ ಅನಾವರಣದೊಂದಿಗೆ ’ದಿಟ್ಟ ದಿನಗಳೆಡೆಗೆ’ ಕನಸುವ ಕವನ ಅನ್ನಿಸಿತು.
LikeLiked by 1 person
ಧನ್ಯವಾದಗಳು ಸರ್ ,,,,,,,,,
LikeLike
ಶರಣು ಸ್ವಾಮಿ ….
ನಿಮ್ಮ ಯೋಚನೆ , ವಿಚಾರಗಳು ಹಾಗೂ ಅದಕ್ಕೆ ತೊಡಿಸಿದ ಶಬ್ದಗಳು ಅಧ್ಬುತ.
LikeLiked by 1 person
ತಮ್ಮ ಓದುವಿಕೆಯ, ಆಳವಾದ ಅರ್ಥೈಸಿಕೊಳ್ಳುವಿಕೆಯ ತಾಳ್ಮೆಗೆ ಧನ್ಯವಾದಗಳು,,,,,,,,,
LikeLike