ನಮ್ಮ ನಾಡಿನ, ಸಾಗರಮಾತಳ ಮಗ
ಪ್ರಪಂಚದ ಅತೀ ಎತ್ತರದ ಶಿಖರ ಸಾಗರಮಾತ (ಚೋಮೋಲುಂಗ್ಮ), ಇದನ್ನು ಮೌಂಟ್ ಎವರೆಸ್ಟ್ ಎಂಬ ಹೆಸರಿನಿಂದಲೂ ಕರೆಯುತ್ತಾರೆ, ಸಮುದ್ರ ಮಟ್ಟದಿಂದ ಸುಮಾರು 8848 ಮೀಟರ್ (29029 ಅಡಿ) ಎತ್ತರದ ಬೃಹತ್ ಸೌಂದರ್ಯ ರಾಶಿ, ಧವಳ ಹಿಮಗಿರಿ, ಇದರ ಸೌಂದರ್ಯ ನೋಡಲು ಎರಡು ಕಣ್ಣುಗಳು ಸಾಲವು, ಇದರ ಚೆಲುವನ್ನೂ ವರ್ಣಿಸಲು ಯಾವ ಪದಗಳಿಂದಲೂ ಆಗದು, ಇದೊಂದು ಹಿಮ ಗಣಿ, ಕವಿ ಕಾಳಿದಾಸನಿಗೆ ಅದ್ಭುತದಂತೆ ಕಂಡ ಈ ಬೃಹತ್ ಶಿಖರ, ಕಾವ್ಯವಾಗಿ ಹೊರಹೊಮ್ಮಿದ್ದು ಹೀಗೆ
ಹೀಗೆ ಕವಿಗಳ ಮನಸೂರೆಗೊಳಿಸಿದ ಮಹಾ ಚೆಲುವಿನ ಗಣಿ ಇದು, ಇನ್ನು ಪರ್ವತಾರೊಹಿಗಳಿಗಂತೂ ಸಾಗರಮಾತ (ಮೌಂಟ್ ಎವರೆಸ್ಟ್) ಯಾವಾಗಲು ಉನ್ನತ ಕನಸಾಗಿ ಕಾಡುತ್ತಿರುತ್ತದೆ, ಹೀಗೆ ಕನಸು ಕಾಣುತ್ತಲೇ ಅದನ್ನು ಹತ್ತಿ ಮುತ್ತಿಕ್ಕಿ ಬಂದ ಹಲವು ಶೂರರು ನಮ್ಮಲ್ಲಿ ಕಾಣಸಿಗುತ್ತಾರೆ, ಅದಕ್ಕಾಗಿ ಹಂಬಲಿಸಿ ಅಲ್ಲಿಯೇ ಸ್ವರ್ಗ ಸೇರಿದ ಅನೇಕರೂ ಇದ್ದಾರೆ, ಯಾವಾಗಲೂ ಪರ್ವತಾರೊಹಿಗಳಲ್ಲದವರ ಮನಸ್ಸಿನಲ್ಲಿ ಏಳುವ ಒಂದು ಪ್ರಶ್ನೆ,”ಚಾರಣ ಅಥವಾ ಪರ್ವತಾರೋಹಣದಿಂದಾ ಪ್ರಯೋಜನವೇನು?” ಎಂದು, ಈ ಪ್ರಶ್ನೆಗೆ ಪದಗಳಲ್ಲಿ ಉತ್ತರಿಸುವುದು ಕಷ್ಟವೇ, ಆದರೂ ಚಿಕ್ಕದಾಗಿ ಹೇಳಬೇಕೆಂದರೆ ಪರ್ವತಾರೋಹಣದ ಸಮಯದಲ್ಲಿ ಚಿತ್ತ ಏಕ ಗುರಿಯ ಕಡೆ ಕೇಂದ್ರಿಕೃತವಾಗಿರುತ್ತದೆ, ಮನಸ್ಸು ವೇಗದ ನಿರ್ಧಾರ ತೆಗೆದುಕೊಳ್ಳಲು ತಾಲೀಮು ನಡೆಸುತ್ತಿರುತ್ತದೆ, ಪ್ರಕೃತಿಗೆ ಸ್ವಾತಂತ್ರವಿತ್ತು, ನಾವು ಪ್ರಕೃತಿಗೆ ಶರಣಾಗಿ ಇರಬೇಕಾಗುತ್ತದೆ, ಈ ಎಲ್ಲ ಹಂತದಲ್ಲೂ ಮನಸ್ಸು ಪ್ರಪುಲ್ಲವಾಗಿರುತ್ತದೆ, ಇನ್ನೇನು ಬೇಕು,,,,,, ಮನಸ್ಸಿನ ಪ್ರಪುಲ್ಲತೆಗಲ್ಲವೇ ನಾವು ಹೆಚ್ಚಿನದನ್ನು ಸಂಪಾದಿಸುವುದು, ಮನಸ್ಸಿನ ಪ್ರಪುಲ್ಲತೆಗಲ್ಲವೇ ನಾವು ಬಾಹ್ಯ ಸಾಧನಗಳ ಮೊರೆ ಹೋಗುವುದು, ಅಷ್ಟೇ, ಸರಳ ಸಜ್ಜನಿಕೆಯ ಪ್ರಕೃತಿಯ ಆಳ ಅಗಲಗಳನ್ನು ಅರಿಯುವುದೇ ಒಂದು ಸ್ವಯಂ ಉನ್ಮಾದ, ಇನ್ನು ಎವರೆಸ್ಟಿನ ಚಾರಣದ ವಿಷಯಕ್ಕೆ ಬಂದರೆ ಅದೊಂದು ಅಪಾಯಕಾರಿಯಾದ ಹಾಗು ಅಷ್ಟೇ ವಿಸ್ಮಿತವಾದ ಅಪೂರ್ವ ಅನುಭೂತಿ, ತೇನ್ ಸಿಂಗ್ ನಿಂದಾ ಹಿಡಿದು ಇದುವರೆಗೂ ಬಹಳಷ್ಟು ಜನ ಸಾಹಸಿಗರು ಈ ವಿಸ್ಮಿತ ಅನುಭೂತಿಯನ್ನು ಪಡೆದುಕೊಂಡಿದ್ದಾರೆ,
ಎವರೆಸ್ಟ್ ಅದೊಂದು ನಿರಂತರ ಪಯಣ, ಒಮ್ಮೆ ಹೋಗಿ ಬಂದರೆ ಮತ್ತೊಮ್ಮೆ ಹೋಗಲೇ ಬೇಕು ಎನ್ನುವಂತೆ ಕೈ ಬೀಸಿ ಕರೆಯುವ ಸೌಂದರ್ಯ ಅದರದ್ದು, ಅದಕ್ಕಾಗಿಯೆ ಅವರೀಗ ಇನ್ನೊಂದು ಹೊಸ ಕನಸಿನೊಂದಿಗೆ ಮತ್ತೊಮ್ಮೆ ಹಿಮಾಲಯದತ್ತ ಸಾಗಲು ತಯಾರಿ ನಡೆಸಿದ್ದಾರೆ,ಅದು ಸುಮ್ಮನೆ ಅಲ್ಲ, ಮೈ ನಡುಗಿಸುವ ಆಶಯ ಒಂದನ್ನು ಹೊತ್ತು. ಹೌದು, ಸಾಮಾನ್ಯವಾಗಿ 24000 ಅಡಿಗಳಿಗಿಂತಾ ಎತ್ತರದ ಹಿಮಪರ್ವತಕ್ಕೆ ಹೋಗಿ ಹಿಂತಿರುಗಿ ಬಂದ ಮೇಲೆ, ಸುಮಾರು ಎಂಟು ತಿಂಗಳುಗಳ ಕಾಲ ಚೇತರಿಕೆಗಾಗಿ ಬಿಡುವು ಮಾಡಿಕೊಳ್ಳಬೇಕಾಗುತ್ತದೆ, ಇದು ಚಾರಣದ ಒಂದು ನಿಯಮವೂ ಹೌದು, ಆದರೆ ಗಣೇಶ್ ಅವರು ಚೋ-ಯೂ (cho-oyu) ಎಂಬ ಪರ್ವತ (ಮೌಂಟ್ ಎವರೆಸ್ಟ್ ಗಿಂತಾ ಬರಿ 622 ಅಡಿ ಕಮ್ಮಿ) ಹತ್ತಿ ನಂತರ ಯಾವುದೇ ಬಿಡುವಿಲ್ಲದೆ ಅಲ್ಲಿಂದ ನೇರವಾಗಿ ಮೌಂಟ್ ಎವರೆಸ್ಟ್ ಹತ್ತಲು ಹೊರಟಿದ್ದಾರೆ, ಇದೇನು ಸಾಮಾನ್ಯ ಕೆಲಸವಲ್ಲ, ಇದನ್ನು ಇದುವರೆಗೂ ಯಾರು ಮಾಡಿರಲಿಕ್ಕೂ ಇಲ್ಲಾ, ಇದು ಒಂದು ವಿಶ್ವದಾಖಲೆಯ ಪ್ರಯತ್ನ ಕೂಡ ಹೌದು, ಆದರೆ ಇಲ್ಲಿ ವಿಶ್ವದಾಖಲೆ ಇವರ ಗುರಿ ಅಲ್ಲ, ಚಾರಣದ ಶಕ್ತಿಯ ಗಮ್ಮತ್ತಿಗೆ ಕೊನೆ ಇಲ್ಲ ಎಂದು ತೋರಿಸುವುದೇ ಇವರ ಗುರಿ, ಅಂದರೆ ಒಂದೇ ಏಟಿಗೆ ೫೮೦೦೦ ಅಡಿ ಏರಿದ ಕೀರ್ತಿ ಇವರದಾಗುತ್ತದೆ, ಈ ಬಾರಿ ಏರುವಾಗಲೂ ಅವರ ಉದ್ದೇಶ “ಸರ್ವ ಧರ್ಮಗಳ ಸಮನ್ವಯ, ಜೊತೆಗೆ ಎಲ್ಲ ರಾಷ್ಟ್ರಗಳ ಶಾಂತಿಯ ಸ್ಥಿರತೆಯನ್ನು ಸಾರುವುದೇ ಆಗಿದೆ. ಅದಕ್ಕಾಗಿ ಏಳು ಧರ್ಮಗಳ ಧರ್ಮಗ್ರಂಥಗಳನ್ನು ಜೊತೆಗೆ ೨೨೬ ದೇಶಗಳ ದ್ವಜವನ್ನು ಎವೆರೆಸ್ಟಿನ ಮೇಲೆ ಹಾರಿಸುವ ಉದ್ದೇಶದಿಂದಾ ಕೊಂಡೊಯ್ಯುತ್ತಿದ್ದಾರೆ, ಆಗ ಜಗವೇ ಬೆಚ್ಚಿ ಭಾರತದೆಡೆಗೆ, ಅದರಲ್ಲೂ ಕರ್ನಾಟಕದೆಡೆಗೆ ನೋಡುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.
ಅವರಿಗೆ ಆರ್ಥಿಕ ಸಹಾಯ ಮಾಡಲು ಇಚ್ಚಿಸುವವರಿಗಾಗಿ (ಗಣೇಶರಿಗೆ ಸಹಾಯ ಮಾಡಿದ ಪಿನಾಕಲ್ ಸಂಸ್ಥೆಯ ಅಕೌಂಟ್ ಸಂಖ್ಯೆ)
ಬ್ಯಾಂಕ್ IFSC ಸಂಖ್ಯೆ : CITI0000004
ಗಣೇಶ್ ಅವರ ಬಳಿ ಮಾತನಾಡಲು ಇಚ್ಚಿಸುವ ಸಹೃದಯಿಗಳಿಗಾಗಿ ಅವರ ದೂರವಾಣಿ ಸಂಖ್ಯೆ : +91- 9845399705
ಪಾರ್ಟ್ ೩- https://www.youtube.com/watch?v=VFmB4TA7FGk ]]]]]]]]
ನಮ್ಮೊಳಗಿನ ಶಕ್ತಿಯನ್ನು ವಿಶ್ವಕ್ಕೆ ಪರಿಚಯಿಸಲು ಹೊರಟಿರುವ ಸಾಗರಮಾತಳ ಮಗನಿಗೆ ತೆರೆದ ಮನಸ್ಸಿನಿಂದ ಹಾರೈಸೋಣ, ತಾಯಿಯ ಪ್ರೇಮವನು ಗೆದ್ದು ಬಾ ಮಗು ಎಂದು,,,, ಬನ್ನಿ ಮಧುರ ಮನಸ್ಸಿನ ಕನ್ನಡಿಗರೇ ಅವರೊಂದಿಗೆ ಕೈ ಜೋಡಿಸೋಣ.
(ಕರ್ನಾಟಕದಿಂದಾ ಎವರೆಸ್ಟ್ ಹತ್ತಿದ ಇನ್ನೊಬ್ಬ ವ್ಯಕ್ತಿ ಎಂದರೆ “ಚೈತನ್ಯ”, ಆದರೆ ದುರಾದೃಷ್ಟ, ಹತ್ತಿ ಇಳಿಯುವಾಗ ಎವರೆಸ್ಟಿನಲ್ಲಿಯೆ ಕಣ್ಮರೆ ಆದರು, ಇನ್ನೂ ಅವರ ದೇಹ ಎವರೆಸ್ಟಿನ ಮಂಜಿನಲ್ಲಿ ರಕ್ಷಿಸಲ್ಪಟ್ಟಿದೆ, ಅವರಿಗೊಂದು ಭಾವಪೂರ್ಣ ಶ್ರದ್ದಾಂಜಲಿ)
ಚಿತ್ರ ಕೃಪೆ : ಅಂತರ್ಜಾಲ
Sir nimdu yadadru books bardidira?
LikeLiked by 1 person
ಪುಸ್ತಕ ಬರೆದಿದ್ದೇನೆ ಮಲ್ಲನ್ ಅವರೇ,,,,,, ಈ ವರ್ಷದ (೨೦೧೪) ರ ನವೆಂಬರ್ ನಲ್ಲಿ ಬಿಡುಗಡೆ ಆಗಬಹುದು,,,,, ಅದರ ಬಗ್ಗೆ ಸಧ್ಯದಲ್ಲೇ ತಿಳಿಸುತ್ತೇನೆ.
ನಿಮ್ಮ ಓದುವ ಕಾಳಜಿ ಹಾಗು ಅರ್ಥೈಸಿಕೊಳ್ಳುವ ಶಕ್ತಿ ನಿಜವಾಗಿಯೂ ಬಹಳ ಕುಶಿ ನೀಡಿದೆ.
ಧನ್ಯವಾದಗಳೊಂದಿಗೆ
– ಜೀ ಕೇ ನ
LikeLike